ಜರ್ಮನಿ ಜಯಹೋ!

ಜಯ ಅಥವಾ ಜಯಕ್ಕ ನನ್ನ ಚಿಕ್ಕಜ್ಜನ ಮಗಳು. ಅಂದರೆ ನಿಜಾರ್ಥದಲ್ಲಿ ನನಗೆ ಇವಳು ಅತ್ತೆ ಆದರೆ ಬಳಕೆಯಿಂದ ಅಕ್ಕ ಇವಳು. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಈಕೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವಳೂ ಹೌದು. ಅವಳ ಗಂಡ, ಜ್ಞಾನಶೇಖರ್ ಬಾಶ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ತಮ್ಮ ಕೆಲಸದ ಮೇರೆಗೆ ಬಾಶ್ ಕಂಪನಿಯ ತವರು ಮನೆಯಾದ ಜರ್ಮನಿಗೆ ಆಗಾಗ ಹೋಗುತ್ತಿರುತ್ತಾರೆ. (ಜ್ಞಾನಶೇಖರ ಮಾವ ತಮಾಷೆಗಾಗಿ ನಾನು ನನ್ನ ತವರು ಮನೆ ಜರ್ಮನಿಗೆ ಹೋಗುತ್ತಿದ್ದೇನೆ ಎನ್ನುತ್ತಾರೆ!) ಈ ಬಾರಿ ಜರ್ಮನಿಗೆ ಜಯಕ್ಕನೂ ಹೋಗಿದ್ದಳು. ಒಟ್ಟಿಗೆ ಮಕ್ಕಳು, ಜ್ಯೋತ್ಸ್ನಾ ಹಾಗೂ ಆದಿತ್ಯರೂ ಇದ್ದರು. ಅವಳ ಜರ್ಮನಿಯ ಪ್ರವಾಸ ಕಥನ ಇಲ್ಲಿದೆ ಓದಿ.

ಪತಿ (ಜ್ಞಾನಶೇಖರ) ಜರ್ಮನಿಗೆ ೬ ವಾರಗಳ ಆಫೀಸ್ ಕೆಲಸಕ್ಕೆಂದು ಹೋಗುವವರಿದ್ದರು. ಜರ್ಮನಿ ಅವರಿಗೆ ಹೊಸತಲ್ಲ, ಓಡಾಡಿ,ತಂಗಿ,ತಾನು ಬಹಳ ಮೆಚ್ಚಿದ ದೇಶವನ್ನು ಪತ್ನಿ,ಮಕ್ಕಳಿಗೂ ತೋರಿಸುವ ಉಮೇದು ಅವ್ರಿಗೆ. ನಮ್ಮ ದೇಶವನ್ನೇ ನೋಡದೆ ಸೀದಾ ಪರದೇಶವನ್ನು ನೋಡಿ ಹೆಮ್ಮೆ ಪಡುವುದು ಸರಿಯೆ ಎಂಬ ಭಾವ ನನ್ನದು.ಆದರೆ ಪತಿಯ ಉತ್ಸಾಹಕ್ಕೆ ತಲೆ ಬಾಗಿದೆ. ಅವರೇ ಪಾಸ್ ಪೋರ್ಟ್, ವೀಸಾ ಅಂತ ಬಹಳ ಮುತುವರ್ಜಿಯಿಂದ ಓಡಾಡಿ,ಮೇ ೧೧ರ ಬೆಳಿಗ್ಗೆ ಹೊರಡಲು ಟಿಕೆಟ್ ತೆಗೆದು ನಂತರ ತಮ್ಮ ಪ್ರವಾಸವನ್ನು ಕೈಗೊಂಡರು.೬ ವಾರಗಳ ಕೆಲಸ ಮುಗಿಸಿ ನಮ್ಮನ್ನು ಕರೆದೊಯ್ಯಲಿಕ್ಕಾಗಿಯೇ ಮೇ.೯ರ ಬೆಳಗಿನ ಝಾವ ಬೆಂಗಳೂರಿಗೆ ಬಂದಿಳಿದರು.ನಾನೆಷ್ಟು ಸೋಮಾರಿ ಗೊತ್ತಲ್ಲ, ಅವರು ಬಂದ ನಂತರ ಅವರ ಮಾರ್ಗದರ್ಶನದಲ್ಲೇ ಬಟ್ಟೆ,ಬರೆಯ ತಯಾರಿ ನಡೆಯಿತು. ಈ ನಡುವೆ ಅಲ್ಲೆಲ್ಲೋ ಜ್ವಾಲಾಮುಖಿ ಎದ್ದು ವಿಮಾನಗಳು ಹಾರಾಡದೆ ನಮ್ಮ ಪ್ರವಾಸವು ರದ್ದಾಗುವ ಸಂಭವವೂ ಇತ್ತು,ಹೊರಡುವ ಮೊದಲು ಅದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡೇ ಪ್ರವಾಸವನ್ನು ಕೈಗೊಂಡೆವು.

More

Shikari begins…

Dear friends,

Shooting for my new film, Shikari will start from 21 May 2010. The legendary actor, Mammootty will be reaching Bangalore soon. Pre-production for the film is happening round the clock. So I will take your leave from the blog till I finish the first schedule.

Few friends have already started joining the film page in Face Book and in Orkut. Hope rest of you will join us there soon. You can also keep a tab on our website, www.shikarithefilm.com.

Happy hunting within each of you.

Love

Abhaya Simha

ರಾಜೇಶ್ ಪಾಸಾಗಲಿ…!

ಮುಂದಿನ ಚಿತ್ರ, ‘ಶಿಕಾರಿ’ ನಿರ್ಮಣಕ್ಕೆ ತಯಾರಿಗಳು ಭರದಿಂದ ಸಾಗಿದೆ. ಒಂದು ಸಂಜೆ ಗೆಳೆಯ ರಾಜೇಶನ ದೂರವಾಣಿ ಕರೆ ಬಂತು. ಅವನು ಐ.ಎ.ಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದ! ಎಂಥಾ ಸಂತೋಷದ, ಸಂಭ್ರಮದ ಸಮಯ ಅದು! ಕಳೆದ ಸುಮಾರು ಹತ್ತು ವರುಷಗಳ ಸ್ನೇಹ ನಮ್ಮದು. ಅದರ ಉದ್ದಕ್ಕೂ ಐ.ಎ.ಎಸ್ ತಯಾರಿಯಲ್ಲಿ ರಾಜೇಶ ಕಳೆದ ದಿನಗಳು, ರಾತ್ರಿಗಳು ನನಗೆ ಗೊತ್ತು. ದೆಹಲಿಯಲ್ಲಿನ ಚಳಿಯಲ್ಲಿ, ಸುಡು ಬಿಸಿಲಿನಲ್ಲಿ, ಮಂಗಳೂರಿನ ಕೊಂಪೆಯಂಥಾ ಹಾಸ್ಟೆಲ್ಲಿನಲ್ಲಿ, ಬೆಂಗಳೂರಿನ ಬಿಡುವಿಲ್ಲದ ಟ್ರಾಫಿಕ್ಕಿನಲ್ಲಿ, ಕಾಫೀ-ಹೌಸ್ ಕಾಫಿಯೊಂದಿಗೆ ಅದೆಷ್ಟೋ ಬಾರಿ ಭೇಟಿ ಮಾಡಿದ್ದೆವು, ಮನೆಯಲ್ಲಿ ರಾತ್ರಿ ಊಟ ಮಾಡಿ ಕೈ ಒಣಗುವವರೆಗೆ ಮಾತನಾಡಿ ಸಿಸ್ಟಂ ಸರಿ ಇಲ್ಲ ಎಂದು ಗೊಣಗಾಡಿದ್ದೆವು. ಅದಕ್ಕೆಲ್ಲ ಒಂದು ಸುಂದರ ಅಂತ್ಯವಾಗಿ ಈ ಸುದ್ದಿ ಕೊಟ್ಟ ರಾಜೇಶ, ಅನೇಕ ನಿಮಿಷಗಳವರೆಗೆ ನನ್ನನ್ನು ಮೂಕನನ್ನಾಗಿಸಿದ್ದ. ಆದರೆ ಇದು ಅಂತ್ಯವೇ? ಅಥವಾ ಹಳೇ ಸಿನೆಮಾಗಳಲ್ಲಿ ಹೇಳುವಂತೆ, “ಇದು ಅಂತ್ಯವಲ್ಲ, ಕೇವಲ ಆರಂಭ ಮಾತ್ರವೇ?!”

More

ಸಬರ್ಮತಿಯ ತೀರದಲ್ಲಿ ಒಂದು ದಿನ

ಅಪರಿಚಿತ ನೆಲ, ಅಪರಿಚಿತ ಜನರು, ಒಮ್ಮೆ ಭೇಟಿ ಮಾಡಿ ನಡುವೆ ಒಂದಷ್ಟು ಸಮಯ ಹರಿದು ಹೋದ ನಂತರ ಮತ್ತೆ ಭೇಟಿಯಾದಾಗ ಬರುವಂಥಾ ಒಂದು ಆಪ್ತತೆ ನನ್ನನ್ನು ಇತ್ತೀಚೆಗೆ ಆವರಿಸಿತ್ತು. ಅಹ್ಮದಾಬಾದಿನಲ್ಲಿ ‘ಗುಬ್ಬಚ್ಚಿಗಳು’ ಚಿತ್ರವನ್ನು ಪ್ರದರ್ಶಿಸಲು ಒಂದು ಶಾಲೆಯವರು ಕೇಳಿಕೊಂಡಿದ್ದರು. ಈ ಹಿಂದೆ ಅಹ್ಮದಾಬಾದಿಗೆ ನಾನು ಒಮ್ಮೆ ಹೋಗಿದ್ದೆ. ಯೂತ್ ನೆಕ್ಸ್ಟ್ ಎನ್ನುವ ಪ್ರಾಜೆಕ್ಟಿಗಾಗಿ ಅಹ್ಮದಾಬಾದಿನಲ್ಲಿ ಚಿತ್ರೀಕರಣ ಮಾಡಿದ್ದೆ. ಈಗ ಮತ್ತೆ ಅಲ್ಲಿಗೆ ಹೋಗುವುದು ಸಂತಸ ತಂದಿತ್ತು. ೨೫ನೇ ತಾರೀಕಿನ ಆದಿತ್ಯವಾರ ನನ್ನ ಚಿತ್ರ ಅಹ್ಮದಾಬಾದಿನ ಸ್ಯಾಟಲೈಟ್ ಸ್ಥಳದಲ್ಲಿರುವ ಆನಂದ್ ನಿಕೇತನ್ ವಿದ್ಯಾಲಯವು ತೋರಿಸುವುದಾಗಿ ನಿಶ್ಚಯವಾಯಿತು.

More

Previous Older Entries Next Newer Entries