ABHAYA TALKIES

ಸ್ವರಗಳ ಮಿಲನ ಭಾವಗಳ ಮೇಳಕ್ಕೆ!

February 1, 2010 · 7 Comments

ತೊಂಭತ್ತರ ದಶಕದಲ್ಲಿ ದೂರದರ್ಶನದ ಪ್ರೇಕ್ಷಕರಿಗೆ ಮರೆಯಲಾಗದ ಅನೇಕ ಕಾರ್ಯಕ್ರಮಗಳಲ್ಲಿ ಒಂದು ‘ಮಿಲೇ ಸುರ್ ಮೆರಾ ತುಮ್ಹಾರ’ ಎಂಬ ಐದು ನಿಮಿಷದ ಗೀತೆಯೂ ಒಂದು. ಇಂದು, ಇದೇ ಜನವರಿ ೨೬ಕ್ಕೆ ಅದೇ ಗೀತೆಯ ಹೊಸ ರೂಪ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ ಎಂದು ಕೇಳಿ ಮತ್ತೊಮ್ಮೆ ಮೂಲ ಹಾಡಿನ ಜಾಡು ಹಿಡಿದು ನಡೆದೆ ನಾನು. ಇದರ ಕಿರುಪರಿಚಯ ತಮಗೂ ಇಲ್ಲಿದೆ.

Keep reading →

→ 7 CommentsCategories: Daily Blog · Television

ಗುಬ್ಬಚ್ಚಿ ಹಾರಲು ಕಲಿತ ಪರಿ

January 29, 2010 · 15 Comments

ಕಥೆಯ ಕಟ್ಟುವ ಸಮಯ

ಗೆಳೆಯರಾದ ಇಸ್ಮಾಯಿಲ್, ಪರಮೇಶ್ ಒಂದು ದಿನ ಒಟ್ಟಿಗೆ ಕುಳಿತು ಅದ್ಯಾವುದೋ ಸಿನೆಮಾ ಕುರಿತು ಚರ್ಚೆ ನಡೆಸುತ್ತಿದ್ದೆವು. ಇಸ್ಮಾಯಿಲ್ ಅದೇ ವರ್ಷ ರಾಜ್ಯ ಚಲನ ಚಿತ್ರ ಪ್ರಶಸ್ತಿಯ ಆಯ್ಕೆ ಮಾಡುವ ಸಮಿತಿಯಲ್ಲಿ ಇದ್ದು ಬಂದಿದ್ದರು. ಅವರಿಗೆ ನಾವೂ ಒಂದು ಮಕ್ಕಳ ಚಿತ್ರ ಮಾಡಬೇಕೆಂದು ಅನ್ನಿಸಿತ್ತು. ಅದಕ್ಕೆ ಒಂದು ಕಥೆಯೂ ಅವರ ಬಳಿ ಸಿದ್ಧವಾಗಿತ್ತು. ಅದನ್ನು ಅವರಾಗಲೇ ಪರಮೇಶ್ ಬಳಿ ಹೇಳಿಕೊಂಡಿದ್ದರು. ನನ್ನ ಬಳಿ ಅಂದು ಹೇಳಿಕೊಂಡರು. ಇಬ್ಬರು ಮಕ್ಕಳಿಗೆ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದಿರುತ್ತದೆ, ಅಲ್ಲಿ ವಿಷಯ ‘ಗುಬ್ಬಚ್ಚಿಗಳು’ ಆಗಿರುತ್ತದೆ. ಆದರೆ ಅವರಿಗೆ ಚಿತ್ರತೆಗೆಯಲು ಆ ಪಕ್ಷಿ ಸಿಗದೇ ಹೋಗಿ ಅವರು ಅದನ್ನು ಹುಡುಕಲಾರಂಭಿಸುತ್ತಾರೆ ಎಂದು ಇಸ್ಮಾಯಿಲರ ಕಥೆ ಆರಂಭವಾಗುತ್ತಿತ್ತು. ಅಲ್ಲಿ ಕಾಣೆಯಾದ ಗುಬ್ಬಚ್ಚಿಗಳು ಕೂಡಲೇ ನನ್ನನ್ನು ಕುತೂಹಲಿಯನ್ನಾಗಿಸಿತು! ಹೌದಲ್ಲಾ! ಗುಬ್ಬಚ್ಚಿಗಳು ಎಷ್ಟೊಂದು ಕಡಿಮೆಯಾಗಿವೆ. ಯಾಕಿರಬಹುದು? ಹೀಗಾಗಿ ಕಥೆಯನ್ನು ಸಿನೆಮಾ ಕಥೆ ಮಾಡೋಣ ಎಂದು ಇಸ್ಮಾಯಿಲರಿಗೆ ಗಂಟು ಬಿದ್ದೆ. ಇಸ್ಮಾಯಿಲ್ ಅಂತೂ ತಮ್ಮ ಕಥೆಯನ್ನು ಪೂರ್ಣಗೊಳಿಸಿಕೊಟ್ಟರು.

Keep reading →

→ 15 CommentsCategories: Film Craft

National Award to Gubbachigalu!

January 23, 2010 · 40 Comments

I am pleased to inform you that our film, Gubbachigalu has been selected as the Best Children’s Film for the year 2008 at the National Awards. It’s been a memorable journey for all of us who have been associated with the film. I thank each one of you for being with us during this journey and supporting us, guiding us. Please do visit Gubbachigalu blog (Click here) to know more about the film, watch the trailers, view photographs etc. Thanks once again to you.

Keep reading →

→ 40 CommentsCategories: Daily Blog

ನಟರಂಗ್!

January 21, 2010 · 7 Comments

ಅತುಲ್ ಕುಲಕರ್ಣಿ ನಟಿಸಿರುವ, ಮರಾಠೀ ‘ನಟರಂಗ್’ ಎಂಬ ಚಿತ್ರದ ಪ್ರದರ್ಶನವನ್ನು ಅದರ ನಿರ್ಮಾಪಕರಾದ ಝೀ ಮರಾಠೀ ವಾಹಿನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಅದನ್ನು ನೋಡಲು ಗೆಳೆಯರಾದ ಪರಮೇಶ್ವರ್ ಕರೆದಿದ್ದರು (ಇವರು ಝೀ ಕನ್ನಡವಾಹಿನಿಯಲ್ಲಿ ಕಥಾ ವಿಭಾಗದ ಮುಖ್ಯಸ್ಥರು). ಅಂದು ನಟರಾದ ಅತುಲ್ ಕುಲಕರ್ಣಿ ಹಾಗೂ ನಾನಾ ಪಾಟೇಕರ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಚಿತ್ರ ಮಹಾರಾಷ್ಟ್ರದ ಜನಪದ ಕಲೆ ತಮಾಷಾ ಹಿನ್ನೆಲೆಯಲ್ಲಿ ಬಂದಿರುವ ಈ ಚಿತ್ರ ಮಹಾರಾಷ್ಟ್ರದ ಖ್ಯಾತ ಲೇಖಕ ಆನಂದ್ ಯಾದವ್ ಅವರ ಕಾದಂಬರಿ ಆಧಾರಿತವಾಗಿದೆ. ಈ ಚಿತ್ರವನ್ನು ಸ್ವತಃ ಅತುಲ್ ಕುಲಕರ್ಣಿ, ನಾನಾ ಪಾಟೇಕರರಂಥಾ ದಿಗ್ಗಜರೊಡನೆ ನೋಡುವ ಅವಕಾಶ ನನಗೆ ಒದಗಿ ಬಂತು. ಪ್ರದರ್ಶನಕ್ಕೆ, ಕನ್ನಡ ಚಿತ್ರರಂಗದ, ರಮೇಶ್ ಅರವಿಂದ್, ಚೇತನ್, ಯೋಗೇಶ್ ಹೀಗೆ ಹಲವು ಪ್ರಸಿದ್ಧರು ಬಂದಿದ್ದರು.

Keep reading →

→ 7 CommentsCategories: Film reviews