Welcome to My Blog
Here is a masonry blog layout with no sidebarಮರಣದ ನೀರವತೆ
ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಪೋಲ್ಯಾಂಡಿನ ಸಿನೆಮಾ ಫೀಲ್ಡ್ ಆಫ್ ಡಾಗ್ಸ್ ಚಿತ್ರ ನನಗೆ ತಟ್ಟಿದ ಸಿನೆಮಾ. ಈ ಸಿನೆಮಾವನ್ನು ನಿರ್ದೇಶಿಸಿದವರು ಲೇಹ್ ಮೆಜೆವ್ಸ್ಕಿ. ಆಡಮ್ ಎನ್ನುವ ಕವಿ, ಸಾಹಿತ್ಯದ ಉಪನ್ಯಾಸಕ ಒಂದು ಭೀಕರ ಅಪಘಾತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಅವನು ಮಾತ್ರ...
ಒಮರ್
ಯುದ್ಧದಿಂದ ಬಳಲಿರುವ ಪಾಲೆಸ್ತೇನಿಯಾದಿಂದ ಮೂಡಿ ಬಂದ ಪ್ಯಾರಡೈಸ್ ನೌ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಮನಸ್ಪರ್ಷಿ ಆ ಚಿತ್ರದ ನಿರ್ದೇಶಕ ಹನಿ ಅಬು-ಅಸೆದ್ರ ೨೦೧೩ ಚಿತ್ರ ಒಮರ್ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಮನುಷ್ಯನಿಗೆ ಎಂಥದ್ದೇ ಸ್ಥಳದಲ್ಲಿದ್ದರೂ, ತನಗೊಂದು ನೆಲೆ...
ಬಿಹೇವಿಯರ್
ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನಾನು ನೋಡಿದ ಇನ್ನೊಂದು ಚಿತ್ರ, ಬಿಹೇವಿಯರ್. ಎರ್ನೆಸ್ಟೋ ಡರನಸ್ ನಿರ್ದೇಶನದ ಕ್ಯೂಬಾದ ಚಿತ್ರ ಇದು. ಒಂದು ಕಾಲಘಟ್ಟದ ಚಿತ್ರಣವನ್ನು ನೀಡುವುದರ ಜೊತೆಗೆ ವಿಶ್ವದಾದ್ಯಂತ ಎಲ್ಲೂ ನಡೆಯಬಹುದಾದ, ನಡೆಯುತ್ತಿರುವ ಬಾಹ್ಯ ಪ್ರಪಂಚದಿಂದ ಮಕ್ಕಳ ಮೇಲಿನ ಪ್ರಭಾವದ ಕುರಿತಾಗಿ ಚಿತ್ರ...
ಎರಡು ಪ್ರಪಂಚಗಳ ನಡುವೆ ಚಾಚಿರುವ ಅವ್ಯಕ್ತ ಕೈ
ಅಫ್ಘಾನಿಸ್ಥಾನದಲ್ಲಿ ನಡೆದ ಯುದ್ಧದ ಕಹಿನೆನಪುಗಳು ಆ ಯುದ್ಧದಲ್ಲಿ ಭಾಗಿಯಾದ ಅನೇಕ ರಾಷ್ಟ್ರಗಳಿಗೆ ದಟ್ಟವಾದ ಅನುಭವವಾಗಿದೆ. ಅದನ್ನು ಅನೇಕ ಚಿತ್ರಗಳಲ್ಲಿ ನಾವು ಈಗಾಗಲೇ ನೋಡಿಯೂ ಇದ್ದೇವೆ. ಅಲ್ಲಿನ ಯೋಧರ ಸಾಹಸಮಯ ಚಿತ್ರಣದಿಂದ ಹಿಡಿದು, ಸ್ಥಳೀಯರ ಜೀವನದ ಕುರಿತ ಅನೇಕ ಚಿತ್ರಗಳು ಆಗಲೇ ಬಂದಿವೆ. ಏಳನೇ ಬೆಂಗಳೂರು ಅಂತರರಾಷ್ಟ್ರೀಯ...
ಮನೆಯೊಳಗೆ ಮನೆಯೊಡೆಯನಿಲ್ಲ.
ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಆರಂಭವಾಗಿದೆ. ಮೊದಲ ದಿನ ಪ್ರದರ್ಶನಗೊಂಡ ಝಾಂಗ್ ಯೆಮೂ ನಿರ್ದೇಶನದ ಕಮಿಂಗ್ ಹೋಮ್ ಎನ್ನುವ ಚೈನೀಸ್ ಚಿತ್ರವನ್ನು ನೋಡಿದೆ. ೧೯೬೬ರಿಂದ ೧೯೭೬ರರವರೆಗೆ ಚೈನಾದಲ್ಲಿ ನಡೆದ ಕಲ್ಚರಲ್ ರೆವೆಲ್ಯೂಷನ್ ಎನ್ನುವ ಸಾಮಾಜಿಕ / ರಾಜಕೀಯ ಚಳುವಳಿಯ ಹಿನ್ನೆಲೆಯನ್ನು ಇಟ್ಟುಕೊಂಡು ನವಿರಾದ ಒಂದು...
ಡಿಜಿಟಲ್ ಕ್ಯಾಮರಾ
ಇತ್ತೀಚೆಗೆ ನಾನೂ ಡಿಜಿಟಲ್ ಸಿನೆಮಾ ಮೇಕಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದೇನೆ. ನೋಡು ನೋಡುತ್ತಿದ್ದಂತೆಯೇ ಸೆಲ್ಯುಲಾಯ್ಡ್ ಕಣ್ಮರೆಯಾಗಿ ಡಿಜಿಟಲ್ ಎಲ್ಲೆಡೆ ಆವರಿಸಿಕೊಂಡು ಬಿಟ್ಟಿದೆ. ಇವತ್ತು ಕನ್ನಡಲ್ಲಿ ಹೆಚ್ಚೂ ಕಡಿಮೆ ಎಲ್ಲಾ ಚಿತ್ರಗಳು ಡಿಜಿಟಲ್ ತಂತ್ರಜ್ಞಾನದಲ್ಲೇ ಚಿತ್ರೀಕರಿಸಲ್ಪಡುತ್ತಿವೆ. ನನ್ನ ಕಳೆದ ಮೂರೂ ಚಿತ್ರಗಳಲ್ಲಿ...
ಚಲಿಸುವ ಬಿಂಬಗಳ ಹಿಂದೆ ತಿರುಗುವ ಚಕ್ರಗಳು
ಸಿನೆಮಾ ಎನ್ನುವುದು ಒಂದು ಮಾಯೆ. ಇದನ್ನು ನಂಬಿ ಬದುಕುವವರ ಜೀವನಗಳು ಅವೆಷ್ಟೋ! ಇದನ್ನು ಮನರಂಜನೆಯ ಮಾಧ್ಯಮ ಎಂದು ಕೆಲವರು ಗ್ರಹಿಸಿದರೆ, ಇನ್ನು ಕೆಲವರು ಅದನ್ನು ಸಂದೇಶ ತಲುಪಿಸುವ ಮಾಧ್ಯಮವನ್ನಾಗಿ ಕಂಡರು. ಮತ್ತೂ ಕೆಲವರಿಗೆ ಸಿನೆಮಾ ಒಂದು ಅಭಿವ್ಯಕ್ತಿಯ, ಸೃಜನಶೀಲ ಮಾಧ್ಯಮವಾಗಿತ್ತು. ಆದರೆ ಇವೆಲ್ಲಾ ದೃಷ್ಟಿಕೋನಗಳ ಹಿಂದೆ...
ಅದೇರಾಗ ಹೊಸಾ ತಾಳ
ಸಿನೆಮಾ ಮಾಧ್ಯಮ ಹುಟ್ಟಿದಾಗ, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದು ಅದರ ಸೃಷ್ಟಿಕರ್ತರಾಗಿದ್ದ ಲೂಮಿಯರ್ ಸಹೋದರರೇ ಹೆಳಿದ್ದರಂತೆ. ಆದರೆ ಕೇವಲ ಉಪಕರಣವಾಗಿದ್ದದ್ದು, ಅನೇಕ ಸಾಹಸಿಗಳ ಕೈಸೇರಿ ಒಂದು ಶಕ್ತ ಮಾಧ್ಯಮವಾಗಿ ರೂಪುಗೊಂಡಿತು. ಆದರೆ, ಈ ಮಾಧ್ಯಮಕ್ಕೆ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ಸದಾ ಹೊಸ ಹುರುಪನ್ನು ಕೊಡುತ್ತಲೇ...
ಸಕ್ಕರೆಯ ಸವಿ ಆರಂಭ
ಬಹಳ ದಿನಗಳ ನಂತರ ಮತ್ತೆ ಬ್ಲಾಗಿನೆಡೆಗೆ ಬಂದಿದ್ದೇನೆ. ವಿಳಂಬಕ್ಕೆ ಮತ್ತು ಮತ್ತೆ ಮರಳಿ ಬರುವುದಕ್ಕೆ ಎರಡಕ್ಕೂ ಒಂದೇ ಕಾರಣ. ನನ್ನ ಹೊಸ ಚಿತ್ರ ‘ಸಕ್ಕರೆ’. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೀಪಾ ಸನ್ನಿದಿ ಅಭಿನಯದ ನನ್ನ ಕಥೆ, ಚಿತ್ರಕತೆಯ ಹೊಸ ಚಿತ್ರ ‘ಸಕ್ಕರೆ’ ಚಿತ್ರಕ್ಕೆ ದೃಶ್ಯಗಳ ಚಿತ್ರೀಕರಣ ಮುಗಿಸಿ ಹಾಡುಗಳ ಚಿತ್ರೀಕರಣ...
Shikari is now online!
Hello friends, Our film, Shikari (Kannada) is available for online viewing. Please watch the film and leave your comments in the site. Thanks. Shikari (120 Min / Kannada / Color / DTS / 2012) https://www.hometalkies.com/shikaari2012/ - Abhaya Simha
Shikari – The hunt within
Finally my film Shikari is reaching the screens in Kerala on 9th of March. Due to some unforeseen delays the film is releasing now and it was becoming difficult to answer as to when the film would be released. It’s a welcome relief for me and my team that it's finally...
‘ನಾದಾ’ನಂದ
ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ನಾ. ದಾಮೋದರ ಶೆಟ್ಟಿ ಸರ್ ಬಗ್ಗೆ ಅವರ ಶಿಷ್ಯರಾದ ನಾನು ಮತ್ತು ನನ್ನ ಹೆಂಡತಿ ರಶ್ಮಿಯ ಒಂದಷ್ಟು ನೆನಪುಗಳು. ನಮ್ಮಿಬ್ಬರ ಗುರುಗಳಾದ ನಾದಾರಿಗೆ ಇತ್ತೀಚೆಗೆ ಮಂಗಳೂರಿನಲ್ಲಿ ಒಂದು ಅಭಿನಂದನಾ ಸಮಾರಂಭ ನಡೆಯಿತು. ಗಿರೀಶ್ ಕಾಸರವಳ್ಳಿ, ಬಿ. ಜಯಶ್ರೀ,...
ಪ್ರವಾಸೋದ್ಯಮ ಎನ್ನುವ ರೇವ್ ಪಾರ್ಟಿ
ಉಡುಪಿಯ ಬಳಿಯ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದ ರೇವ್ ಪಾರ್ಟಿಯ ಕುರಿತಾಗಿ ಆಡಳಿತ ಪಕ್ಷದಿಂದ ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಎಂಬ ಹೆಸರಿನಲ್ಲಿ ಸಮರ್ಥನೆಗಳು ನಡೆದರೆ, ವಿರೋಧಪಕ್ಷಗಳಿಂದ ನೈತಿಕ ನೆಲೆಯಲ್ಲೂ ಸಾರ್ವಜನಿಕ ವಲಯದಲ್ಲಿ ಧಾರ್ಮಿಕ ನೆಲದ ಭಾವುಕ ಮೂಲದದಿಂದೆದ್ದ, ಇನ್ನೂ ಬಿಡಿಸಿ ಹೇಳುವುದಾದರೆ ಸಂಪ್ರದಾಯನಿಷ್ಠರ...
‘ದಿ ಡರ್ಟಿ ಪಿಚ್ಚರ್’?!
ಇವತ್ತು ‘ದಿ ಡರ್ಟಿ ಪಿಕ್ಚರ್’ ಸಿನೆಮಾವನ್ನು ನೋಡಿದೆ. ವಿದ್ಯಾಬಾಲನ್ ಅಭಿನಯಿಸಿದ ಈ ಚಿತ್ರದ ಬಗ್ಗೆ ಬಹಳ ಹೊಗಳಿಕೆಯ ಮಾತುಗಳನ್ನು ಕೇಳಿ ಬಹಳ ದಿನಗಳಿಂದ ಕಾದು ಅಂತೂ ಇವತ್ತು ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ನೋಡಿ ಬಹಳ ನಿರಾಸೆಯಾಯಿತು. ದಕ್ಷಿಣ ಭಾರತದಲ್ಲಿ ತನ್ನ ಮಾದಕ ಅಭಿನಯಕ್ಕೆ ಹೆಸರಾದ ಸಿಲ್ಕ್ ಸ್ಮಿತಾ ಜೀವನಾಧಾರಿತ...
ಖಾಸಗಿ ಶಾಲೆಗಳೂ ಸೇರಿದಂತೆ ಎಲ್ಲ ಪ್ರಾಥಮಿಕ ಶಾಲೆಗಳೂ ಕನ್ನಡ ಮಾಧ್ಯಮ ಶಾಲೆಗಳೇ ಆಗಬೇಕು
[ಚಿ. ವಿ. ಶ್ರೀನಾಥಶಾಸ್ತ್ರೀಯವರು ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಇದಬೇಕು ಎಂಬುದರ ಕುರಿತಾಗಿ ಬರೆದ ಲೇಖನ] ಪ್ರಾಥಮಿಕ ಶಿಕ್ಷ್ಷಣವೆಂದರೆ ಮಕ್ಕಳು ತಾವು ನೋಡಿದ, ಓದಿದ ಹಾಗೂ ಕೇಳಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು, ಕಲಿತ ವಿಷಯಗಳ ಬಗ್ಗೆ ಆಸಕ್ತಿ ತೋರಿಸುವುದು, ನೆನಪಿನಲ್ಲಿನ ವಿಷಯಗಳನ್ನು ಮನಸ್ಸಿಗೆ ತಂದುಕೊಂಡು...
ಇವತ್ತು ಶಾಲೆಗೆ ರಜೆ!
ಕನ್ನಡ ಶಾಲೆಗಳನ್ನು ಮುಚ್ಚುವ ಕುರಿತಾಗಿ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಎಫ಼್.ಟಿ.ಐ.ಐನಲ್ಲಿ ಇದ್ದಾಗ ಅನೇಕ ವರುಷಗಳಿಂದ ಆಗಾಗ ಅದನ್ನು ಮುಚ್ಚಲು ಮಾಡುತ್ತಿದ್ದ ಪ್ರಯತ್ನಗಳನ್ನೂ ಕಂಡಿದ್ದೆನೆ. ಕಾರಣ ಎರಡಕ್ಕೂ ಒಂದೇ ಈ ಸಂಸ್ಥೆಗಳು ಲಾಭದಾಯಕವಲ್ಲ ಎನ್ನುವುದು. ಶಿಕ್ಷಣದಲ್ಲಿ ಲಾಭ ಹುಡುಕುವುದು ಒಂದು ವಿಚಿತ್ರ...
The Secret of the Unicorn
Billions of blue blistering barnacles! ಟಿನ್ ಟಿನ್ ಕಥೆ ಆಧರಿತ ಆನಿಮೇಟೆಡ್ ಚಿತ್ರ ಬರ್ತಾ ಇದೆ ಅಂತ ನಾನು ರೋಮಾಂಚನಗೊಂಡೆ. ನನ್ನ ಬಾಲ್ಯದ ಆಪ್ತ ಗೆಳೆಯ, ಬೆಲ್ಜಿಯಂ ದೇಶದ ಟಿನ್ ಟಿನ್ ಒಂದು ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾಗುತ್ತಿರುವುದು ಈಗ ಅನೇಕ ತಿಂಗಳುಗಳ ಹಿಂದೆ ಈ ಚಿತ್ರದ ಮೊದಲ ಪೋಸ್ಟರ್ ನೋಡಿದಾಗಲೇ ನನಗೆ...
ಮಮ್ಮುಟ್ಟಿಯವರೊಂದಿಗೆ ಶಿಕಾರಿ ಕಥೆ
ಶಿಕಾರಿ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಪೂನಂ ಬಾಜ್ವಾ ಉದಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಶಿಕಾರಿಯ ನಿರ್ಮಾಣ ಕಥನದ ವಿಸ್ತಾರ ರೂಪ ಇಲ್ಲಿದೆ. ನಮ್ಮ ಕನಸಿನ ಕೂಸು, `ಶಿಕಾರಿ’ ಸಿನೆಮಾ ಈಗ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಸಂದರ್ಭದಲ್ಲಿ ದೀಪಾವಳಿಯ ನೆಪ ಹಿಡಿದು ನಮ್ಮ ಚಿತ್ರದ ಬಗ್ಗೆ, ಮತ್ತು ನಮ್ಮ ನಾಯಕ ನಟ...